
ಕೊರೋನಾ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಗಾಯಕ ಎಸ್ಪಿಬಿ ಅವರ ಬೇಗ ಚೇತರಿಸಿಕೊಳ್ಳಲಿ ಎಂದು ಸ್ಯಾಂಡಲ್ವುಡ್ನ ಕಲಾವಿದರು ಸೆಪ್ಟೆಂಬರ್ 3ರಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಈ ಸಾಮೂಹಿಕ ಪ್ರಾಥನೆಯಲ್ಲಿ ಒಂದೇ ವೇದಿಕೆಯಲ್ಲಿ ಯಶ್, ಸುದೀಪ್,ಶಿವಣ್ಣ, ದರ್ಶನ್,ಪುನೀತ್ ಸೇರಿದಂತೆ ಅನೇಕ ಕಲಾವಿದರು ಎಸ್ಪಿಬಿ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕಲಾವಿದರ ಸಂಘದಲ್ಲಿ ಸೆಪ್ಟೆಂಬರ್ 3ರಂದು ಈ ಕಾರ್ಯಕ್ರಮದ ನಡೆಯಲಿದ್ದು ಒಂದೇ ವೇದಿಕೆಯಲ್ಲಿ ಸ್ಯಾಂಡಲ್ವುಡ್ನ ಕಲಾವಿದರು ಕಾಣಿಸಲಿದ್ದಾರೆ.